ಸೋಮವಾರ, ಜನವರಿ 28, 2013

ವರದಿಗಾರಿಕೆ - ನನ್ನ ಆಶಯ
ಜನವರಿ 24ರ  ಉದಯವಾಣಿ ದಿನಪತ್ರಿಕೆಯ ಬಹುಮುಖಿ ಪುರವಣಿಯಲ್ಲಿ ಗೌಳಿ ಎಂಬ ಗಾಳಿಗೊಡ್ಡಿದ ದೀಪ  ಎಂಬ ವರದಿ ಪ್ರಕಟವಾಗಿದೆ. ಬಸವರಾಜ್ ಹೊಂಗಲ್ ತುಂಬ ಅದ್ಭುತವಾಗಿ ವರದಿ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡು ತಾಲ್ಲೂಕಿನಲ್ಲಿಯೂ ಗೌಳಿಗಳಿದ್ದಾರೆ. ಅವರ ಹಾಡಿಗಳನ್ನು ನೋಡಿ ವಿಷಾದಪಟ್ಟಿದ್ದು ಇದೆ. ಅವನ್ನೆಲ್ಲ ಯಥಾವತ್ತು ಚಿತ್ರಿಸಿರುವ  ಈ ವರದಿ ಈ ವರ್ಷ ನಾನು ಓದಿದ ಅತ್ಯುತ್ತಮ ಮಾನವೀಯ ವರದಿ.
ಇಂದು ಮಾಧ್ಯಮ ಬದಲಾಗಿದೆ. 20 ವರ್ಷಗಳ ಹಿಂದೆ ನಾನು ಓದುತ್ತಿದ್ದ ಪತ್ರಿಕೆಗಳು ಇಂದಿಗೂ ಇವೆಯಾದರೂ ಅವುಗಳು ಹೆಚ್ಚು ಬಂಡವಾಳಶಾಹಿಯಾಗಿ ಪರಿವರ್ತನೆಗೊಂಡಿವೆ.