ಶುಕ್ರವಾರ, ನವೆಂಬರ್ 7, 2008

ನಾಯಿಬಾಲ ಡೊಂಕೆ...ಕಾಗೆ ಬಣ್ಣ kariyee.....

ಕಳೆದ ಕೆಲವು ದಿನಗಳ ಹಿಂದೆ ಕರ್ಪೋರಶನ್ ಸ್ಟಾಪಲ್ಲಿ ನಿಂತಿದ್ದೆ. ಬಸ್ ಬಂತು ಹತ್ತಿದೆ. ಬಸ್ ಸ್ವಲ್ಪ ಮುಂದ್ ಹೋಗುವಷ್ಟರಲ್ಲಿ ಒಬ್ಬ ಹುಡುಗಿ ಸರ್ ವಿಧಾನ ಸೌಧಕ್ಕೆ ಹೋಗ್ಬೇಕು ಎಲ್ಲಿ ಇಲಿಲಿ ಅಂತ ಕೇಳಿದ್ಲು. ಬಸ್ ಡ್ರೈವರ್ ಗಹಗಹಿಸಿ ನಗತೊಡಗಿದ....ಅಷ್ಟರಲ್ಲಿ ಕಂಡಕ್ಟರ್ ಬಂದು ಡ್ರೈವರ್ಗೆ ಹೇಳ್ದ, ಯಾಕೆ ಹುಡುಗಿಯರನ್ನ ಆಟಾ ಅಡಿಸ್ತಿಯ, ಆಕೆ ಇಗಿಲ್ಲಿಂದ ನಡೆದುಕೊಂಡು ಹೋಗ್ಬೇಕು. ಹಗೆ ಹೇಳ್ತಾ ಹೇಳ್ತಾ ಬಸ್ ನಿಲ್ಲಿಸಿ ಆಕೆಗೆ ರೂಟ್ ಹೇಳಿಕೊಟ್ಟ. ಹಾಗೆಯೇ ಕೆಲವು ದಿನಗಳ ಹಿಂದಷ್ಟೇ ನನಗೊಂದು ಅನುಭವ ಆಗಿತ್ತು. ಬಸ್ ಸ್ಟಾಪ ಲ್ಲಿ ಫೋನಲ್ಲ್ಲಿ ಮಾತಾಡುತ್ತಿದ್ದೆ. ಬಸ್ ಬಂತು . ಅದನ್ನು ನಿಲ್ಲಿಸದೆ ಹಾಗೆಯೇ ಡ್ರೈವರ್ ಓಡಿಸತೊಡಗಿದ... ನಾನು ಅದ್ರು ಕಷ್ಟಪಟ್ಟು ಹತ್ತಿದೆ. ಜೋರಾಗಿ ಬಯ್ಯತೊಡಗಿದ. ಮೊಬೈಲಿನಲ್ಲಿ ಮಾತಾಡ್ತಿರ, ಬೇಗ ಹತ್ತಿಕೊಲ್ಲಿ ಅಂತ. ನನಗೆ ಸಿಟ್ಟು ಬಂತು. ಮೊಬೈಲಲ್ಲಿ ಮಾತಾಡೋದು ನನ್ನ ಬಿಸಿನೆಸ್. ಬಸ್ ಸ್ಟಾಪಲ್ಲಿ ಬಸ್ ನಿಲ್ಲಿಸೋದು ನಿಮ್ಮ ಬಿಸಿನೆಸ್. ನೀವು ನಿಮ್ಮ ಕೆಲಸ ಸರಿಯಾಗಿ ಮಾಡಿಕೊಂಡು ಇನ್ನೊಬ್ರ ವಿಷಯದಲ್ಲಿ ಮಾತಾಡಿ, ಎಂದೆ.

Ii eradU Gatanegalu ನಮ್ಮ ಸುತ್ತಲಿನ ಜಗತ್ತಿನಲ್ಲಿ ಅಸಹನೆಯನ್ನು ಹೊರಹಾಕುವ ಮಾರ್ಗಗಳು. ನಮ್ಮ ಕಚೆರಿಗಳಲ್ಲು ಅಷ್ಟೆ. ಅವರ ವ್ಯಕ್ತಿತ್ವಕ್ಕೆ, ಅಹಮಿಗೆ ಪೆಟ್ಟು ಬಿದ್ದಾಗ ನೇರವಾಗಿ ಮಾತಾಡುವ ಆರೋಗ್ಯಕರ ಮನಸ್ತಿತಿ ಯಾರಿಗೂ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಸ್ವಭಾವ ಕೆಲವರದ್ದದರೆ ಇನ್ನು ಕೆಲವರು ಸಾರ್ವಜನಿಕವಾಗಿ ಬೈದು ತಮ್ಮ ಅಧಿಕಾರ ಸ್ಥಾಪಿಸುವ ಯತ್ನ ಮಾಡುತ್ತಾರೆ. ನಮಗೆ ಆಗದಿದ್ದರೆ ಅವರ ಬಗ್ಗೆ , ಅವರು ಮಾಡುತ್ತಿರುವ ಸಣ್ಣ ತಪ್ಪನ್ನು ದೊಡ್ಡದಾಗಿ ಮಾಡುತ್ತೇವೆ. ಆ ಮೂಲಕ ಅಹಂ ಇಲ್ಲದವರ ಅಹಂ ಅನ್ನು ಕೆನಕುತ್ತೇವೆ. ಒಬ್ಬರ ಅಧಿಕಾರವನ್ನು ಒಪ್ಪಿಕೊಲ್ಲಳಗದಾಗ ಗುಂಪುಗಾರಿಕೆ ಮಾಡುತ್ತೇವೆ, ಕೆಲಸವನ್ನು ಧಿಕ್ಕರಿಸಿ ವಹಿಸಿದ ಕೆಲಸಕ್ಕೆ ನೆಪ ಹೇಳುತ್ತೇವೆ. ಆದರೆ ಹಾಗೆ ಮಾಡುವವರಿಗೆ ಗೊತ್ತಿರುವುದಿಲ್ಲ. ಅವರು ತಾವೇ ತಾವಾಗಿ ತಮ್ಮಋಣಾತ್ಮಕ ಮನೋಭಾವವನ್ನು ಜಗಜ್ಜಹಿರು ಮಾಡುತ್ತಿದ್ದೇವೆ ಎಂದು.

ಕೊನೆಗೊಂದು ದಿನ ಇವರ ಗುರಿ ತಪ್ಪಿಹೋಗುತ್ತದೆ. ಕೇವಲ ಇವರ ಕಾಲಡಿಯ ನೆಲಮಾತ್ರ ಉಳಿದುಕೊಳ್ಳುತ್ತದೆ. ದುರಂತವೆಂದರೆಈ ಋಣಾತ್ಮಕ ಮನೋಭಾವದ ಜನರಿಗೆ ಆತ್ಮಾವಲೋಕನ ಎಂಬುದು ಇರುವುದಿಲ್ಲ. ತಾವು ಮಾಡಿದ್ದೆ ಸರಿಯಾಗಿರುತ್ತದೆ. ಅದಕ್ಕಾಗಿ ಇನ್ನಷ್ಟು ರುನತ್ಮಕವಾಗಿ ವರ್ತಿಸುತ್ತಾರೆ. ಬಸ್ಸು ನಿಲ್ಲಿಸದೆಜನರ ಪ್ರಾಣ ತೆಗೆದು ಸಸ್ಪೆನ್ದಾಗುತ್ತಾರೆ. ಹುಡುಗಿ ದಾರಿ ತಪ್ಪಿ ಅಳತೊದಗಿದಾಗ ಸಂತೋಷಪಡುವ ಡ್ರೈವರ್ ಮಗಳಿಗೆ ಇನ್ಯಾರೋ ದಾರಿ ತಪ್ಪಿಸುತ್ತಾರೆ. ಆಗಲು ಕೂಡ ಈ ಋಣಾತ್ಮಕ ಮಂದಿ ತಮ್ಮ ತಪ್ಪನ್ನು ಮರೆಯುತ್ತಾರೆ. ಬೇರೆಯವರ ಕಡೆಯೇ ಬೆರಳು ತೋರಿಸುತ್ತಾರೆ....