ಸೋಮವಾರ, ಜೂನ್ 15, 2009

ಇಂದು ಬಾಲಿವುಡ್ ನಟನೊಬ್ಬನ ಮನೆಯ ಕೆಲಸದಾಕೆ ತನ್ನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಪೋಲಿಸು ಕೇಸು ದಾಖಲಿಸಿದ್ದಾಳೆ. ಅದಕ್ಕೆ ಸರಿಯಾಗಿ ಮಾಧ್ಯಮಗಳು , ಪೋಲಿಸರೆಲ್ಲ ಅಗತ್ಯ ಕ್ರಮಗಳನ್ನು ಮಾಡುತ್ತಿದ್ದಾರೆ. ಈಗ ನನ್ನನ್ನು ಕಾಡುತ್ತಿರುವ ಪ್ರಶ್ನೆಯೆಂದರೆ ಕರ್ನಾಟಕದಲ್ಲೆನಾದರು ಈ ರೀತಿಯಾದರೆ ಎಷ್ಟು ಜನ ಹೆಣ್ಣುಮಕ್ಕಳು ಹೊರಗೆ ಬಂದು ದೂರು ದಾಖಲಿಸುತ್ತಾರೆ? ಒಂದುವೇಳೆ ದೂರು ದಾಖಲಿಸಿದರೂ ಅದನ್ನು ಗಂಭಿರವಾಗಿ ಪರಿಗಣಿಸುವವರು ಯಾರು? ಬದಲಿಗೆ ಆಕೆಯ ಚಾರಿತ್ರ್ಯವನ್ನೇ ಅನುಮಾನಿಸುವ ಟ್ಯಾಬೊಲಾಯ್ಡ್ ಸಂಸ್ಕೃತಿ ಸರಿಯಾದ ನ್ಯಾಯ ಕೊಡಿಸಬಲ್ಲುದ ಎಂದು ಇವತ್ತು ಹೆಣ್ಣು ಮಕ್ಕಳು ಮತ್ತವರ ಸಂಬಂಧ ಪಟ್ಟವರು ಯೋಚಿಸಬೇಕಾಗಿದೆ. ಕರ್ನಾಟಕವು ಸೇರಿದಂತೆ ಭಾರತದ ಬಹುತೇಕ ಪುರುಷಪ್ರಧಾನ ರಾಜ್ಯಗಳಲ್ಲಿ ಹೆಣ್ಣು ಮಕ್ಕಲಿಗೆನೆ ಆದರು ಮಧ್ಯಮವರ್ಗದ ಮಂದಿ ಪ್ರಕರಣ ಮುಚ್ಚಿ ಹಾಕಲು ನೋಡುತ್ತಾರೆ. ಯಾಕೆಂದರೆ ಮಾನ ಮರ್ಯಾದೆಗಳು ಕೇವಲ ಪುರುಷನಿಗೆ ಮಾತ್ರ. ಹೆಣ್ಣು ಮಗುವಿನ ಸಂರಕ್ಷಣೆಯ ಜವಾಬ್ದಾರಿ ಹೊರಲಾರದ, ಆಕೆಗೆ ಭಾವನಾತ್ಮಕ ಬೆಂಬಲ ನೀಡಿ ಅನ್ಯಾಯದ ವಿರುದ್ಧ ಹೋರಾಡುವ ಮನಸತ್ವವನ್ನು ತುಂಬುವ ಪರಿಸ್ಥಿತಿಯನ್ನು ನಮ್ಮಲ್ಲೂ ಕಲ್ಪಿಸಬೇಕಾಗಿದೆ. ಇದು ನಮ್ಮಲ್ಲೇ ಇರುವ ತಾಯಂದಿರು, ಅಕ್ಕ-ತಂಗಿಯರಿಂದ ಮಾತ್ರ ಸಾಧ್ಯ. ಹೆಣ್ಣೊಬ್ಬಳು ನೊಂದು ರೋಧಿಸುತ್ತಿದ್ದರೆ ಆಳಿಗೊಂದು ಕಲ್ಲು ಹಾಕದೆ, ಆಕೆಯ ನೋವಿಗೆ ಮಿಡಿಯುವ ಮಾನವೀಯತೆ ಬೆಳೆಸಿಕೊಳ್ಳಬೇಕಿದೆ. ಅಂದಾಗ ಮಾತ್ರ ಮಾತೃದೇವೋ bhava , ಹೆಣ್ಣು ಹೀಗೆ ಇರಬೇಕು ಎಂದು ಭಾಷಣ ಮಾಡುವವರಿಗೂ ಒಂದು ಆತ್ಮಬಲ ಬರುತ್ತದೆ. ಅದು ಬಿಟ್ಟು ಎಲ್ಲೋ ಬಾರುಗಳಲ್ಲಿ ಕುಡಿಯುತ್ತಿದ್ದರೆ ಎಂದು ಹೆಣ್ಣು ಮಕ್ಕಳಿಗೆ ಹೊಡೆದರೆ ಸಂಸ್ಕೃತಿಯ ಪುನರುತ್ಥಾನ ಆಗುವುದಿಲ್ಲ..